22.9 C
New York
Thursday, September 19, 2024

Buy now

spot_img

ಹೊರಗುತ್ತಿಗೆಯಲ್ಲಿಯೂ ಖಾಯಂ ನೇಮಕಾತಿ ಮೀಸಲು ಮಾನದಂಡ ಪಾಲಿಸಲು ಆಗ್ರಹ

ಮಂಡ್ಯ :- ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ವೇಳೆ ಖಾಯಂ ನೇಮಕಾತಿಗೆ ಅನುಸರಿಸುವ ಮೀಸಲಾತಿ ಮಾನದಂಡ ಪಾಲಿಸಬೇಕು ಎಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು.
ರಾಜ್ಯ ಸರ್ಕಾರ ಹೊರಗುತ್ತಿಗೆ ನೇಮಕಾತಿ ಯಲ್ಲಿ ಮೀಸಲಾತಿ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ, ಆದರೆ ಸರ್ಕಾರದ ಸುತ್ತೋಲೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿ ಜಾರಿಗೊಳಿಸತಕ್ಕದ್ದು ಎಂದು ಸೂಚಿಸಿರುವುದು ಹೆಸರಿಗೆ ಮಾತ್ರ ಹೊರ ಗುತ್ತಿಗೆಯಲ್ಲಿ ಮೀಸಲಾತಿ ಎಂಬಂತೆ ಆಗಿದೆ,ಇದೊಂದು ಸರ್ಕಾರದ ಗಂಭೀರ ಲೋಪ ಆಗಿದ್ದು, ಕೂಡಲೇ ಲೋಪವನ್ನು ತಿದ್ದುಪಡಿ ಮಾಡಿ ಸುತ್ತೋಲೆ ಹೊರಡಿಸಿ ಖಾಯಂ ನೇಮಕಾತಿ ವೇಳೆ ಅನುಸರಿಸುವ ಮೀಸಲು ನಿಯಮಗಳನ್ನು ಹೊರ ಗುತ್ತಿಗೆ ನೇಮಕಾತಿಯಲ್ಲಿ ಪಾಲಿಸಬೇಕು ಹಾಗೂ ಎಲ್ಲಾ ಹೊರ ಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.
ಹೊರಗುತ್ತಿಗೆ ನೌಕರರನ್ನು ಒದಗಿಸುವ ಹೊರ ಸಂಪನ್ಮೂಲ ಏಜೆನ್ಸಿ ಗಳಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆದ್ಯತೆ ನೀಡಬೇಕು,ಹೊರಗುತ್ತಿಗೆ ನೌಕರರನ್ನು ಹನ್ನೊಂದು ತಿಂಗಳ ನಂತರ ಕೈಬಿಡುವುದನ್ನು ನಿಲ್ಲಿಸಿ, ಅವರನ್ನೇ ಮುಂದುವರೆಸಿ, ಕನಿಷ್ಠ 5 ವರ್ಷ ಗುತ್ತಿಗೆ ಆಧಾರದಲ್ಲಿ ದುಡಿದವರಿಗೆ ಖಾಯಂ ನೇಮಕಾತಿ ಮಾಡುವ ಸಂದರ್ಭದಲ್ಲಿ ಮೊದಲ ಆದ್ಯತೆ ನೀಡಬೇಕು, ಕನಿಷ್ಟ 10 ವರ್ಷ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸಿದವರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಇಲಾಖೆ,ಮಂಡಳಿ,ವಿಶ್ವವಿದ್ಯಾನಿಲಯ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು,ರಾಜ್ಯ ಸರ್ಕಾರ ಬಂಡವಾಳಶಾಹಿ-ಕಾರ್ಪೊರೇಟ್ ಕಂಪನಿಗಳ ಪರವಾದ ಉದಾರಿಕರಣ-ಖಾಸಗೀಕರಣ ನೀತಿಗಳನ್ನು ಕೈ ಬಿಟ್ಟು, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತುಂಬಬೇಕು. ಹನ್ನೊಂದು ತಿಂಗಳ ಹೊರಗುತ್ತಿಗೆ ನೇಮಕಾತಿ ಪದ್ಧತಿ ರದ್ದುಮಾಡಿ, ಖಾಯಂ ಆಗಿ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು .
ಸಮಿತಿಯ ಆರ್.ಕೃಷ್ಣ, ಗಿರಿಜಮ್ಮ,ಅಂಬೂಜಿ, ವಿಜೇಂದ್ರ ಕುಮಾರ್,ಕೆ ಎಸ್ ಶಿವಲಿಂಗಯ್ಯ, ರಾಜೇಶ್, ಪರಶುರಾಮ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles